ನವದೆಹಲಿ, ನ. 20 : ಅಜ್ಮೇರ್ ಷರೀಫ್, ಮೆಕ್ಕಾ ಮಸೀದಿ ಹಾಗೂ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎನ್ನಲಾದ ಸ್ವಾಮಿ ಅಸೀಮಾನಂದ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ.
ಅಸೀಮಾನಂದ ಕಳೆದ ಎರಡು ವರ್ಷಗಳಿಂದ ಸಿಬಿಐ, ಮಹಾರಾಷ್ಟ್ಪ ಮತ್ತು ರಾಜಸ್ತಾನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಒರಿಸ್ಸಾದ ಡಾಂಗ್ ಜಿಲ್ಲೆಯಲ್ಲಿ ಅಸೀಮಾನಂದ ಅವರ ಅಶ್ರಮವಿದೆ. ಅಲ್ಲಿ ತಮ್ಮ ಸಹಚರರೊಂದಿಗೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಚಾರ, ವಿನಿಮಯ, ಸಂಚು ರೂಪಿಸುವುದು ಮತ್ತಿತರ ಕೃತ್ಯಗಳಲ್ಲಿ ತೊಡಗುತ್ತಿದ್ದರೆಂಬ ಆರೋಪದ ಅವರ ಮೇಲಿದೆ.
ಅದೇ ಪ್ರದೇಶದಲ್ಲಿ ಅಸೀಮಾನಂದ ಬುಡಕಟ್ಟು ಜನರ ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದಾರೆ. ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆನ್ನಲಾಗಿದೆ. ಬಲಪಂಥೀಯ ಉಗ್ರವಾದಿಗಳ ಜಾಲದ ಪ್ರಮುಖ ಆರೋಪಿ ಸುನೀಲ್ ಜೋಶಿ ಜತೆಯೂ ಅಸೀಮಾನಂದ ಅವರಿಗೆ ನಿಕಟ ಸಂಪರ್ಕ ಇತೆ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಗ್ಯಾಸಿಂಗ್ ಅವರ ಜೊತೆ ಕೆಲಸ ಮಾಡಿದ್ದಾರೆ. ಈಗಾಗಲೇ ಮಾಲೇಗಾಂವ್ ಸ್ಫೋಟದಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ
No comments:
Post a Comment